Saturday, January 30, 2010

"ವಿಜಯನಗರ ಪುನರ್ ನಿರ್ಮಾಣಕ್ಕೆ ಅಡ್ವಾಣಿ ಶಿಲಾನ್ಯಾಸ"


ಹಂಪೆ (ಕಮಲಾಪುರ), ಜ. 29- "ವರ್ತಮಾನವನ್ನು ಸಮೃದ್ಧಗೊಳಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಭವಿಷ್ಯತ್ ಕಾಲದ ಘಟನೆಗಳು ಪ್ರೇರಣೆ ನೀಡುತ್ತವೆ ಎಂದು ಮಾಜಿ ಉಪ ಪ್ರಧಾನಿ ಸಂಸದ ಎಲ್. ಕೆ. ಆಡ್ವಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಪುನಶ್ಚೆನ ಪ್ರತಿಷ್ಠಾನದ ಆಶ್ರಯದಲ್ಲಿ `ಪ್ರಕಲ್ಪಗಳ ಭೂಮಿಪೂಜೆ ಹಾಗೂ ಕಟ್ಟಡಗಳ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯನ ಆಡಳಿತ ಅನುಕರಣೀಯ ಎಂದ ಹೇಳಿದರು.

`ಕರ್ನಾಟಕಕ್ಕೂ ಮತ್ತು ನನಗೂ ಅವಿನಾಭಾವ ಸಂಬಂಧ ಇದೆ. ಹಂಪೆಗೆ ಎರಡನೇಬಾರಿ ಭೇಟಿ ನೀಡುತ್ತಿದ್ದೆನೆ. ಕಳೆದ ಬಾರಿ ನಾನು ಹಂಪೆಗೆ ಭೇಟಿ ನೀಡಿದಾಗ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದರು ನಾನು ವಚನ ಪಾಲಿಸಿ, ಆಗಮಿಸಿದ್ದೆ ಎಂದು ಹೇಳಿದರು.ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಬಿಂಬಿಸುವ `ಥೀಮ್ ಪಾರ್ಕ್ ' ನಿರ್ಮಾಣ ಆಗುತ್ತಿರುವುದು ಹಾಗೂ ಈ ಸಾಮ್ರಾಜ್ಯದ ವೈಭವ ನೆನಪಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ತಾವು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವರಾಗಿದ್ದಾಗ ಶ್ರೀಕೃಷ್ಣದೇವರಾಯರ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನು ರೂಪಿಸಿದ್ದನ್ನು ಸ್ಮರಿಸಿದ ಅವರು, ಈ ಪ್ರದರ್ಶನ ಹೈದರಾಬಾದ್ನಲ್ಲಿ ಪ್ರಯೊ ಆಗಿದ್ದನ್ನು ಪ್ರಸ್ತಾಪಿಸಿ ವಿಜಯನಗರದ ರಾಜಧಾನಿ ಕರ್ನಾಟಕದ ಹಂಪೆಯಲ್ಲೂ ಕೂಡ ಪ್ರದರ್ಶನಗೊಳ್ಳಬೇಕು ಎಂದು ಸಲಹೆ ನೀಡಿದ್ದಾಗಿ ಹೇಳಿದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಪುನರ್ದರ್ಶನಕ್ಕಾಗಿ ಈ ಸಾಮ್ರಾಜ್ಯದ ಚಟುವಟಿಕೆಗಳನ್ನು ಜನರಿಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ವಿಜಯನಗರ ಪುನಶ್ಚೆನ ಪ್ರತಿಷ್ಠಾನ (ಟ್ರಟ್ಸ್ ಸ್ಥಾಪಿಸಿದ್ದು ವೈಯಕ್ತಿಕವಾಗಿ ಸಾರ್ಥಕತೆ - ತೃಪ್ತಿ ಮೂಡಿಸಿದೆ ಎಂದರು. ಈ ಪ್ರತಿಷ್ಠಾನದ ಚಟುವಟಿಕೆಗಳಿಗೆ ಕೂಡಲೇ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಪ್ರತಿಷ್ಠಾನ ತನ್ನ ಕ್ರಿಯಾ ಯೊನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಮುಂದಿನ ಆಯವ್ಯಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಿ. ನಾಗರಾಜ್ ಅವರು ಮಾತನಾಡಿ, ಅಕ್ಷರ ಧಾಮದ ಮಾದರಿಯಲ್ಲಿ ವಿಜಯನಗರ ವೈಭವದ ಪ್ರತಿಕೃತಿಗಳಲ್ಲದೆ ಸಂಶೋಧನೆ ಉದ್ಯಾನವನ ಮಲ್ಟಿ ಮೀಡಿಯಾ ಪ್ರದರ್ಶನ ಪುಸ್ತಕ ಹಾಗೂ ವಸ್ತು ಸಂಗ್ರಹಾಲಯವನ್ನು ಇಲ್ಲಿ ನಿರ್ಮಿಸಲಾಗುವುದು ಇದಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ನೆರವು ಪಡೆಯಲಾಗಿದೆ ಎಂದರು

ಶ್ರಿ ರವಿಶಂಕರ್ ಗುರೂಜಿ ಅವರು ಸಾನಿಧ್ಯವಹಿಸಿದ್ದರು ಸಂಸದ ಅನಂತ ಕುಮಾರ್, ಸಚಿವರಾದ ಜಿ. ಕರುಣಾಕರ ರೆಡ್ಡಿ ಜಿ. ಜನಾರ್ದನ ರಡ್ಡಿ ಬಿ. ಶ್ರೀರಾಮುಲು ವಿಶ್ವೇಶ್ವರಹೆಗಡೆ ಕಾಗೇರಿ, ಸಂಸದೆ ಜೆ. ಶಾಂತ ಶಾಸಕರಾದ ಆನಂದ್ ಸಿಂಗ್ ಸುರೇಶ್ ಬಾಬು, ಮೃತ್ಯುಂಜಯ ಜಿನಗಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎನ್. ರುದ್ರಗೌಡ ಈ ಸಮಾರಂಭದಲ್ಲಿ ಇದ್ದರು. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಸ್ವಾಗತಿಸಿದರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ವಂದಿಸಿದರು

No comments:

Post a Comment